ಹಳೇಬೀಡು ಜೈನ ಬಸದಿ ದೇವಸ್ಥಾನ

ಹಾಸನ ಜಿಲ್ಲೆಯ ಹಳೇಬೀಡಿನಲ್ಲಿ ಇರುವ ಜೈನ ಬಸದಿ ಸಂಕೀರ್ಣವು ಜೈನ ತೀರ್ಥಂಕರರಾದ ಪಾರ್ಶ್ವನಾಥ, ಶಾಂತಿನಾಥ ಮತ್ತು ಆದಿನಾಥ ರಿಗೆ ಸಮರ್ಪಿತವಾದ ಸ್ಥಳವಾಗಿದೆ. ಜೈನ ಬಸದಿ ಸಂಕೀರ್ಣವು ಕೇದಾರೇಶ್ವರ ದೇವಾಲಯ ಮತ್ತು ದ್ವಾರಸಮುದ್ರ ಸರೋವರದ ಬಳಿ ಇದೆ. ಈ ದೇವಾಲಯಗಳನ್ನು 12ನೇ ಶತಮಾನದಲ್ಲಿ ಹೊಯ್ಸಳ ಸಾಮ್ರಾಜ್ಯದ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು.

ಹಳೇಬೀಡು ಜೈನ ಬಸದಿ ಸಂಕೀರ್ಣವು ಬೆಂಗಳೂರಿನಿಂದ 215.5 ಕಿ.ಮೀ ಮತ್ತು ಹಾಸನದಿಂದ 31.5 ಕಿ.ಮೀ ದೂರದಲ್ಲಿದೆ. ಹಾಗೂ ಹಾಸನ ರೈಲ್ವೆ ನಿಲ್ದಾಣದಿಂದ 27 ಕಿ.ಮೀ ದೂರದಲ್ಲಿ ಇದೆ.

ಇತಿಹಾಸ

ಹೊಯ್ಸಳ ಸಾಮ್ರಾಜ್ಯದ ರಾಜಧಾನಿ ಹಳೇಬೀಡು, 11 ರಿಂದ 14ನೇ ಶತಮಾನದ ವರೆಗೆ ಜೈನಧರ್ಮವು ಈ ಪ್ರದೇಶದಲ್ಲಿ ಪ್ರಬಲ ಅಸ್ತಿತ್ವವನ್ನು ಉಳಿಸಿಕೊಂಡಿತ್ತು. ಹೊಯ್ಸಳರ ಆಳ್ವಿಕೆಯಲ್ಲಿ ಈ ಪ್ರದೇಶವನ್ನು ದ್ವಾರಸಮುದ್ರ ಎಂದು ಕರೆಯಲಾಗುತ್ತಿತ್ತು. ಹೊಯ್ಸಳ ಸಾಮ್ರಾಜ್ಯದ ಅತ್ಯಂತ ಪ್ರಮುಖ ಅರಸ ಬಿಟ್ಟಗ, ಈತನ ನಂತರದ ಹೆಸರು ವಿಷ್ಣುವರ್ಧನ. ಬಿಟ್ಟಿಗ ಹೊಯ್ಸಳ ಸಾಮ್ರಾಜ್ಯದ ಶ್ರೇಷ್ಠ ಆಡಳಿತಗಾರ ಎಂದು ಪರಿಗಣಿಸಲ್ಪಟ್ಟಿದೆ ಮತ್ತು ಸುಮಾರು 1115 ರ ವರೆಗೆ ಈತನು ಜೈನ ನಾಗಿದ್ದನು. ನಂತರ ಹಿಂದೂ ಸಂತ ರಾಮಾನುಜಾಚಾರ್ಯ ಅವರ ಪ್ರಭಾವದ ಅಡಿಯಲ್ಲಿ ವೈಷ್ಣವ ಧರ್ಮಕ್ಕೆ ಮತಾಂತರಗೊಂಡನು. ಅವರ ಆಡಳಿತದ ಅವಧಿಯಲ್ಲಿ, ಹಿಂದೂ ಧರ್ಮ ಮತ್ತು ಜೈನ ಧರ್ಮವು ಅತ್ಯಂತ ಧಾರ್ಮಿಕ ಸಾಮರಸ್ಯದೊಂದಿಗೆ ಸಹ ಅಸ್ತಿತ್ವದಲ್ಲಿತ್ತು. ವಿಷ್ಣುವರ್ಧನನ (ಬಿಟ್ಟಿಗ) ಪತ್ನಿ ಶಾಂತಲಾದೇವಿ ಜೈನ ಧರ್ಮದ ಅನುಯಾಯಿಯಾಗಿ ಉಳಿದಳು. ನಂತರದ ಕಾಲದಲ್ಲಿ ಈ ದೇವಾಲಯವನ್ನು ಮೈಸೂರು ಮಹಾರಾಜರು ನಿರ್ವಹಿಸಿದರು.

ಪಾರ್ಶ್ವನಾಥ ಬಸದಿಯನ್ನು ರಾಜ ವಿಷ್ಣುವರ್ಧನನ ಆಳ್ವಿಕೆಯಲ್ಲಿ ಬೊಪ್ಪದೇವನು ಕ್ರಿಸ್ತಶಕ 1733 CE ರಲ್ಲಿ ನಿರ್ಮಿಸಿದನು. ಬೊಪ್ಪದೇವ ಹೊಯ್ಸಳ ರಾಜ ವಿಷ್ಣುವರ್ಧನನ ಮಂತ್ರಿಯಾಗಿದ್ದ ಗಂಗಾ ರಾಜನ ಮಗ. ಶಾಂತಿನಾಥ ಬಸದಿಯನ್ನು ವೀರಬಲ್ಲಾಳ II ಇವರ ಆಳ್ವಿಕೆಯಲ್ಲಿ 1192 ಅವಧಿಯಲ್ಲಿ ನಿರ್ಮಿಸಲಾಯಿತು.

ಆದಿನಾಥ ಬಸದಿಯು ಜೈನ ಬಸದಿಗಳಲ್ಲಿ ಚಿಕ್ಕದಾಗಿದೆ 12ನೇ ಶತಮಾನದ ಈ ದೇವಾಲಯದ ಒಳಗೆ ಬಾಹುಬಲಿಯ ಏಕಶಿಲೆಯನ್ನು ನಿರ್ಮಿಸಲಾಯಿತು. ಆದರೆ ಈಗ ಈ ಏಕಶಿಲೆಯನ್ನು ಹಳೇಬೀಡು ವಸ್ತು ಸಂಗ್ರಹದ ಹೊರಗೆ ಪ್ರದರ್ಶಿಸಲಾಗಿದೆ.

ಭೇಟಿ ನೀಡಿ
ಬೇಲೂರು ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಹಾಸನ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section